ಕರ್ನಾಟಕ ಸಂಗೀತ
ಕೌಮಾರೀ ಗೌರೀ ವೇಳಾವಳಿ
September 2, 2008 - 5:19am — hamsanandiಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲದ್ದೂ, ನಮ್ಮಲ್ಲಿ ಇರುವುದೂ ಏಕೆ ಎನ್ನುವುದು ನನಗೆ ಗೊತ್ತಿಲ್ಲ.
ನಾನು ಚಿಕ್ಕವನಾಗಿದ್ದಾಗ, ಮಳೆಗಾಲದ, ಅದರಲ್ಲೂ ಸೋನೆಮಳೆಗಾಲದಲ್ಲಿ ಬರುವ ಈ ಹಬ್ಬಗಳ ಮುನ್ನಾದಿನ, ಅಷ್ಟಾಗಿ ದುರಸ್ತಿಯಲ್ಲ ರಸ್ತೆಯ ಆಚೀಚೆ ಕುಳಿತ ವ್ಯಾಪಾರಸ್ಥರ ನಡುವೆ ಹೋಗಿ ಪೇಟೆ ಬೀದಿಯಲ್ಲಿ ಸುತ್ತಿ ಹೂವು ಹಣ್ಣು ಖರೀದಿಸುವ ಆ ಅನುಭವ ಮಾತ್ರ ಇನ್ನೂ ಮರೆತಿಲ್ಲ.
ಅದೆಲ್ಲಾ ಇರಲಿ; ಸಂಪದಿಗರೆಲ್ಲರಿಗೂ ಹಬ್ಬಗಳು ಚೆನ್ನಾಗಿ ಕಳೆಯಲಿ ಎನ್ನುವ ಹಾರೈಕೆಗಳೊಂದಿಗೆ ಒಂದು ಒಳ್ಳೆ ಹಾಡನ್ನು ಕೇಳಿಸಹುದು ಎನ್ನಿಸಿತು. ಮುಂದೆ ಓದಿ »

ರಾಜರಲ್ಲೊಬ್ಬ ರತ್ನ
July 18, 2008 - 3:00am — hamsanandiಜುಲೈ ೧೮, ೨೦೦೮.
ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು.
ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿಷಯ ಗೊತ್ತಿತ್ತೇ ನಿಮಗೆ? ಮುಂದೆ ಓದಿ »

ಹತ್ತು ಮುತ್ತುಗಳು: ರಾಗ ಕಲ್ಯಾಣಿ - ಭಾಗ ೨
March 20, 2008 - 2:34am — hamsanandiಹಲವು ದಿನಗಳ ಹಿಂದೆ ಕಲ್ಯಾಣಿಯ ಬಗ್ಗೆ ಬರಹವೊಂದನ್ನು ಬರೆದಿದ್ದೆ. ಅದರ ಮುಂದಿನ ಭಾಗ ಬರೆಯಬೇಕೆನ್ನುತ್ತಲೇ ತಿಂಗಳುಗಳು ಉರುಳಿವೆ.
ಇರಲಿ- ಇವತ್ತು ನನ್ನ ಮನಸ್ಸಿಗೆ ಹಿಡಿಸಿರುವ ಕಲ್ಯಾಣಿ ರಾಗದ ಹತ್ತು ರಚನೆಗಳ ಬಗ್ಗೆ ಈ ಕೆಳಗಿನ ಪುಟದಲ್ಲೊಂದಷ್ಟು ಮಾತುಗಳು ....

- hamsanandi ರವರ ಬ್ಲಾಗ್
- Login or register to post comments
- 284 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ
February 6, 2008 - 12:31am — hamsanandiಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 300 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
January 6, 2008 - 7:48am — hamsanandiಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.
ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?
(ಚಿತ್ರ: http://www.karnatik.com/ ಕೃಪೆ)
ಮುಂದೆ ಓದಿ »


RSS: